ಗೋಕಾಕ: ಮಂಗಳವಾರ ದಿನಾಂಕ ೨೨ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಶಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ ಭಜರಂಗದಳದ ತಾಲೂಕು ಘಟಕದಿಂದ ಸಭೆ ನಡೆಸಲಾಯಿತು.
ಭಜರಂಗದಳದ ಮುಖ್ಯಸ್ಥರಾದ ಎಂ.ಡಿ ಚುನಮರಿ ಮಾತನಾಡಿ, ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಅತ್ಯಂತ ಹೀನ ಕೃತ್ಯ ವಾಗಿದ್ದು, ಇದಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ವಿಶ್ವ ಹಿಂದೂ ಪರಿಷತ ಭಜರಂಗದಳದ ತಾಲೂಕು ಘಟಕದ ಸದಸ್ಯರು ಉಪಸ್ಥಿತರಿದ್ದರು.