ಯರಗಟ್ಟಿ April 22: ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಮಂಗಳವಾರ ಸುರಿದ ಗಾಳಿ ಮಳೆಯಿಂದ ಮನೆಯ ಚಾವಣಿಯ ಹೆಂಚುಗಳು ಹಾರಿ ಹೋಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಈ ಮನೆಯು ಸುಶೀಲಾ ನಿಂಗಪ್ಪ ಹೊಸಮನಿ (60) ಅವರಿಗೆ ಸಂಬಂಧಿಸಿದ್ದು, ರಂದು ಬಂದ ಬೀರು ಗಾಳಿಯಿಂದ ಮನೆಯ ಛಾವಣಿಯ ಹೆಂಚುಗಳು ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿನ ದವಸ ದಾನ್ಯಗಳು ನೀರು ಪಾಲಾಗಿದ್ದು, ಮನೆಯಲ್ಲಿನ ಎಲೆಕ್ಟ್ರಾನಿಕ್ ಸಾಮಗ್ರಿ ಗಳು ಮಳೆಯಿಂದಾಗಿ ಆದ ಶಾರ್ಟ್ ಸರ್ಕ್ಯೂಟ್ ನಿಂದ ಜಖಂಗೊಂಡಿವೆ.
ಈ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.